ಕವಿತೆ ಕಾರ್ನರ್

ವಾರಸುದಾರ! ಕಪ್ಪು ಕಾಲುಗಳನೇರೆಕ್ಕೆಯಾಗಿಸಿಕಡಿದಾದ ಬೆಟ್ಟವನೇರುವ ಸಾಹಸದೆ ಕಾಲವೆನ್ನುವುದು ಇಳಿಜಾರಿಗೆಜಾರಿಬಿಟ್ಟ ಚಕ್ರವಾಗಿಸರಸರನೆ ಉರುಳುತ್ತ ಹಗಲಿರುಳುಗಳುಸ್ಪರ್ದೆಗಿಳಿದುಗಡಿಯಾರಗಳನೂ ಸೋಲಿಸಿ ಸೂರ್ಯಚಂದ್ರರೂ ಸರದಿ ಬದಲಿಸಿಉಸಿರೆಳೆದುಕೊಂಡು ಕಣ್ಣರಳಿಸಿಜಗವನರ್ಥಮಾಡಿಕೊಳ್ಳುವಷ್ಟರಲ್ಲಿ ಬೆನ್ನು ಬಾಗಿಕಣ್ಣು ಮಂಜಾಗಿಚರ್ಮ ಸುಕ್ಕಾಗಿ ಮುಪ್ಪೆಂಬುದುಮುಂದೆ ನಿಂತಿರಲುಕವಿತೆಯೆಂಬುದು ಮರಣವಾಕ್ಯವಾಗುವುದು ಶವದ ಮುಂದೆ ನಿಂತುಕಣ್ಣಾಲಿ ತುಂಬಿಕೊಂಡಗೆಳೆಯರಮುಖಗಳಲ್ಲೇನೊ ಸಮಾದಾನದ ಭಾವ ಕವಿತೆ ಸೋತಿತೊ ಗೆದ್ದಿತೊ? ಬಿರುಸಿನ ಚರ್ಚೆಯ ನಡುವೆಗೋಣು ಚಿಲ್ಲಿದ ಕವಿಯಾರ ಕಣ್ಣಿಗೂ ಬೀಳುವುದಿಲ್ಲ! ಅನಾಥ ಶವಕೆವೀರಬಾಹು ಮಾತ್ರವೇವಾರಸುದಾರ! ******** ಕು.ಸ.ಮಧುಸೂದನ ರಂಗೇನಹಳ್ಳಿ